ತೂತು ಬಿದ್ದ ನೀಲಿ ಛತ್ರಿ !!

ಈ ಜಗತ್ತೆ ಒಂದು ಜೀವಸಂಕುಲದ ಮಹಾನ್ ಜೀವಶಕ್ತಿ ಇದನ್ನೂ ರಕ್ಷಿಸಲೊಂದು ಬೃಹತ್ ಆಕಾರದ ಛತ್ರಿ, ತೂತು ಬಿದ್ದರೆ ಸೂರ್ಯನ ಕಿರಣ ಒಳನುಗ್ಗಿ ನಮ್ಮನ್ನೇ ಬಲಿ ತೆಗೆದುಕೊಳ್ಳಬಹುದು. ಈಗಾಗಲೇ ಹೀಗಾಗಿದೆ. ಹೊಲಿಯಲು ಆಗದ ಈ ಛತ್ರಿಗೆ ನಾವೇ ಕೆಳನಿಂತು ಪರಿಸರವನ್ನು ಕೆಡಿಸಿ ಸ್ಪೋಟಕಗಳಂಥಹ ಅನಿಷ್ಟ ವಾಯುವನ್ನು ತೂರಿ ತೂತು
ಕೊರದದ್ದು ತೂತು ಬಿದ್ದ ಈ ನೀಲಿ ಛತ್ರಿಯ ಕೆಳಗಿನ ಜೀವ ಸಂಕುಲದ ರಕ್ಷಣೆ ಕಷ್ಟ ಸಾಧ್ಯ. ಇದಕ್ಕೆ ಪರಿಹಾರವನ್ನು ನಾವೇ ಕಂಡುಕೊಂಡು ಇನ್ನಷ್ಟು ಛತ್ರಿ ಹರಿಯದಂತೆ ನೋಡಕೊಳ್ಳಬೇಕಿದೆ ಹಾಗಾದರೆ ಈಗಿರುವ ಅಪಾಯದ ಕ್ಷಣಗಳಲ್ಲಿಯೇ ದಿನಗಳನ್ನು ಕಳೆಯಬಹುದು.

ಈ ಮಾತನ್ನು ಹೇಳಿದ್ದು ಭೂವಾತಾವರದಿಂದ 10 ಕಿ.ಮೀಟರ್ ಮೇಲಿನಿಂದ 40 ಕಿ.ಮೀಟರ್ ವರೆಗೆ ಆಕಾಶಕ್ಕೆ ನೀಲಿ ಪರದೆಯಂತೆ ಹಬ್ಬಿಕೊಂಡಿರುವ ಓಜೋನ್, ಪರದೆ ಈ ಪರದೆ ನೈಸರ್ಗಿಕವಾಗಿಯೇ ಮಾನವ ಜಗತ್ತಿಗೆ ಕೊಟ್ಟ ವರ ಓಜೋನ್ (ಆಮ್ಲಜನಕದ ಬಹುದೂಪ) ತೆಳು ನೀಲಿ ಬಣ್ಣದಿಂದ ಕೂಡಿದ್ದು ನಾವು ಆಕಾಶ ನೋಡಿದಾಗ ಅರಿವಾಗುತ್ತದೆ. ಸೂರ್ಯನೊಂದು ಮೆಗಾವಾಟ್ಸ್‌ನಿಂದ ಉರಿಯುತ್ತಿರುವ ಅಗ್ನಿ ಕುಂಡ, ಇದರಿಂದ ಬರುವ
ಕ್ಷ- ಕಿರಣಗಳು (Ultra Violet Rags) ನೇರವಾಗಿ ಭೂಮಿಗೆ ಬಿದ್ದರೆ ಜೀವಕೋಟಿಗೆ ಅತ್ಯಂತ ಅಪಾಯಕಾರಿ ಪರಿಣಾಮ ಉಂವಾಗುತ್ತದೆ. ಈ ಭೀಕರ ಕಿರಣಗಳನ್ನು ಶಾಂತಗೊಳಿಸಿ ಸೂಕ್ಷ್ಮವಾಗಿ ಭೂಮಿಗೆ ಕಳಿಸುತ್ತವಾದ್ದರಿಂದ ಇದಕ್ಕೆ ‘ರಕ್ಷಾಕವಚ’ ವೆಂದೂ ಕರಯಲಾಗುತ್ತದೆ. ಸೂರ್ಯನ ರಶ್ಮಿಯಲ್ಲಿರುವ ಅಲ್ಟ್ರಾವಾಯೋಲೆಟ್, ಕಿರಣಗಳು ಜೀವಿಗೆ ಮಾರಕವಾದ್ದರಿಂದ ಅದನ್ನು ಫಿಲ್ಬರ್ ಮಾಡಿಕಳಿಸುವುದೇ ಈ ಓಜೋನ್.

ಭೂಮಿಯ ಮೇಲಿನ ಪರಿಸರ ಮಾಲಿನ್ಯದ ತೀವ್ರತೆಯಿಂದಾಗಿ ಅಂದರೆ ಕೈಗಾರಿಕೆಗಳ ಹೊಗೆ, ಅಗ್ನಿ ದುರಂತಗಳ ಪರಿಣಾಮ, ರಾಕೇಟ್, ಜೆಟ್, ವಿಮಾನಗಳ ಇಂಧನ ಉರಿಸುವಿಕೆ (ಈ ಇಂಧನವು ಇಂಗಾಲದ ಮಾನಕ್ಸೈಡ್ ಮತ್ತು ಮತ್ತುಇಂಗಾಲದ ಡೈ ಆಕ್ಸೈಡ್ ಅನಿಲಗಳು ಹೊರಚಲ್ಲುತ್ತದೆ.) ಗಳಿಂದಾಗಿ ಈ ಪರದೆ ಅಲ್ಲಲ್ಲಿ ತೂತು ಬಿದ್ದಿದ್ದರಿಂದ ಸೂರ್ಯನಿಂದ ನೇರವಾಗಿ ಅಲ್ಟ್ರಾವಾಯೊಲೆಟ್ ಕಿರಣಗಳು ಭೂಮಿಯೆಡೆಗೆ ಧಾವಿಸಿ ಬರುತ್ತವೆ. ಈ ಕಾರಣವಾಗಿ ಅತ್ಯಂತ ಅಧಿಕ ಉಷ್ಣತೆಯಿಂದ ಅನೇಕ ಅಪಾಯಗಳಾಗುತ್ತಲಿವೆ. ಮನುಷ್ಯರಿಗೆ ಬರುವ ಚರ್ಮದ ಕ್ಯಾನ್ಸರಿನ ಪ್ರಮಾಣವು ಹೆಚ್ಚುತ್ತಿರುವುದಕ್ಕೆ ಈ ಓಜೋನ್‌ ಪದರದ ಕ್ಷೀಸುವಿಕೆಯೇ ಕಾರಣವಾಗಿದೆ. ನಾವು ಬಳಸುತ್ತಿರುವ ರಾಸಾಯನಿಕಗಳು ವಾಹನಗಳಿಂದ ಕೈಗಾರಿಕೆಗಳಿಂದ ಹೊಮ್ಮುವ ಹೊಗೆಯಲ್ಲಿರುವ ಅನಿಲಗಳು ಓಜೋನ್ ಪದರವನ್ನು ತೂತು ಮಾಡುತ್ತದೆ ಎಂದು ಕಂಡು ಹಿಡಿಯಲಾಗಿದೆ. ಈ ಪದರದ ಕ್ಷೀಣಿಸುವಿಕಗೆ ಇತ್ತೀಚಿಗೆ
ಅಧ್ಯಯನವು ನೈಟ್ರಿಕ್ ಆಕ್ಸೈಡ್ ಪ್ರಬಲ ಕಾರಣವೆಂದು ಹೇಳಿದೆ.

ಅಪಾಯಕಾರಿ ರಾಸಾಯನಿಕ ಗೊಬ್ಬರಗಳು : ಈ ನೈಟ್ರಿಕ್ ಆಕ್ಸೈಡ್ ಅನಿಲವು ಜಗತ್ತಿನಾದ್ಯಂತ ಕೃಷಿಕರು ಬಳಸುತ್ತಿರುವ ಅತೀವ ಪ್ರಮಾಣದ ರಾಸಾಯನಿಕ ಗೊಬ್ಬರಗಳಲ್ಲಿ ಅಧಿಕವಾಗಿದೆ ಎಂದು ಕಂಡು ಹಿಡಿಯಲಾಗಿದೆ. ಇದರಿಂದ ಯಾರೂ ಅರಿಯದಷ್ಟು ಪ್ರಮಾಣದಲ್ಲಿ ದುಷ್ಟರಿಣಾಮ ಬೀರಿದೆ. ಓಜೋನ್ ವಲಯವನ್ನು ಕ್ಷೀಣಿಸುವ ಕ್ಲೋರಿನ್ ಹ್ಯಾಲನ್ ಮತ್ತು ಬ್ರೋಮೈಡ್‌ನಂತಹ ವಸ್ತುಗಳನ್ನು ಬಹಿಷ್ಕರಿಸುವ ಮಾತುಗಳು ಕೇಳಿಬರುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನಗೊಳ್ಳಲು ಕೃಷಿಕರು ಬಳಸುತ್ತಿರುವ ರಾಸಾಯನಿಕ ಗೊಬ್ಬರಗಳು ಮುಖ್ಯಕಾರಣವಾಗಿದೆ. ಪ್ರತಿವರ್ಷಕ್ಕಿಂತ ವರ್ಷವೂ ಹೆಚ್ಚಿನ ಪ್ರಮಾಣದಲ್ಲಿ ಈ ಗೊಬ್ಬರಗಳು ಮುಖ್ಯಕಾರಣವಾಗಿವೆ. ಪ್ರತಿವರ್ಷಕ್ಕಿಂತ ವರ್ಷವೂ ಹೆಚ್ಚಿನ ಪ್ರಮಾಣದಲ್ಲಿ ಈ ಗೊಬ್ಬರಗಳು ಭೂಮಿಯನ್ನು ಸೇರುತ್ತವೆ. ಈ ಕಾರಣವಾಗಿ ಓಜೋನ್ ದುರ್ಬಲಗೊಳುತ್ತದೆ.

ಓಜೋನ್‌ ಪರದೆಯು ದುರ್ಬಲಗೊಂಡು ಕ್ಷೀಣಿಸುವುದು ತಡೆಗಟ್ಟಲು ಇಂಥಹ ರಾಸಾಯನಿಕವನ್ನು ಬಳಸದೇ ಇರುವುದು, ಅಗ್ನಿದುರಂತಗಳನ್ನು ತಡೆಯುವುದು ಪರಿಸರವನ್ನು ಮಲಿನಗೊಳಿಸದೇ ಇರುವುದೇ ಆಗಿದೆ. ಈ ನಿಟ್ಟಿನಲ್ಲಿ ಚಿಂತಿಸಲು ವಿಶ್ವದ ಅನೇಕ ವಿಜ್ಞಾನಿಗಳು ಸೇರುತ್ತಿದ್ದಾರೆ. ಅಮೇರಿಕಾದ ವಿಜ್ಞಾನಿಗಳು ಮುಂದುವರೆದು ತೂತುಬಿದ್ದು ಸ್ಥಳವನ್ನು ತೇಪೆ ಹಾಕಲು ಪ್ರಯತ್ನ ಪಟ್ಟರೂ ಫಲಕಾಣಲಾಗಿಲ್ಲ.
************

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎದೆಯೊಳು ಮೊರೆದಿದೆ ಒಂದೇ ಸಮನೆ
Next post ಅರಿತವೇನು ಅಂತರಾಳವ?

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

cheap jordans|wholesale air max|wholesale jordans|wholesale jewelry|wholesale jerseys